
ಯಲ್ಲಾಪುರ: ವಿಶ್ವದರ್ಶನ ಕೇಂದ್ರಿಯ ವಿದ್ಯಾಲಯದಲ್ಲಿ ವಿದ್ಯಾಥಿಗಳು ತಯಾರಿಸಿದ ಗಣಿತ ಮಾದರಿ ಹಾಗೂ ಚಿತ್ರಪಟಗಳು ಗಮನ ಸೆಳೆದವು.
ಮುರಾರ್ಜಿ ಶಾಲೆಯ ಮಕ್ಕಳು ಶಾಲಾ ಶಿಕ್ಷಕರೊಂದಿಗೆ ಆಗಮಿಸಿ ಗಣಿತ ಮಾದರಿ ಹಾಗೂ ಚಿತ್ರಪಟಗಳನ್ನು ಗಮನಿಸಿದರು. ನಂತರ ಅವರು ವಿದ್ಯಾರ್ಥಿಗಳಿಂದ ಮಾದರಿಗಳ ಬಗ್ಗೆ ಮಾಹಿತಿ ಪಡೆದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಮಾದರಿಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಪ್ರಸನ್ನ ಹೆಗಡೆ, ವೆಂಕಟೇಶ ಪಾಲನಕರ್ ಹಾಗೂ ನೀತಾ ನಾಯ್ಕ ನಿರ್ಣಾಯಕರಾಗಿ ಭಾಗವಹಿಸಿದ್ದರು.