Archives: News

ಕ್ರೀಡಾ ದಿನಾಚರಣೆ ಹಾಗೂ ಧ್ಯಾನ್ ಚಂದ್ ಅವರ ಸ್ಮರಣೆ

ಯಲ್ಲಾಪುರ: ತಾಲೂಕಿನ ಇಡಗುಂದಿ ವಿಶ್ವದರ್ಶನ ಪ್ರೌಢ ಶಾಲೆಯಲ್ಲಿ ನಡೆದ ಕ್ರೀಡಾ ದಿನಾಚರಣೆ ಹಾಗೂ ಧ್ಯಾನ್ ಚಂದ್ರ ಜನ್ಮದಿನ ಕಾರ್ಯಕ್ರಮವನ್ನು ವಿಶ್ವದರ್ಶನ ಸೇವಾ ತಂಡದ ಸದಸ್ಯರಾದ ಎಂ.ಆರ್ ಭಟ್ಟ ಅವರು ಉದ್ಘಾಟಿಸಿದರು. ಕ್ರೀಡಾಪಟು ಹಾಗೂ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಜೆ.ಎಂ ತಾಂಡುರಾಯನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಉಪನ್ಯಾಸ ನೀಡಿದರು. ರಾಜೇಶ್ ಆಗೇರ್ ಅವರು ಪ್ರಾರ್ಥಿಸಿದರು. ವಿಶ್ವೇಶ್ವರ ಗಾಂವ್ಕರ್ ಅವರು ಸ್ವಾಗತಿಸಿ, ವಂದಿಸಿದರು. ಪಾಲಕರು ಹಾಗೂ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಕಾರ್ಯಕ್ರಮ ವೀಕ್ಷಿಸಿದರು.

Read More

ಯೋಗ ಶಿಬಿರಕ್ಕೆ ಚಾಲನೆ

ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯಾದ “ವಿಶ್ವದರ್ಶನ ಸೇವಾ” ಆಯೋಜಿಸಿರುವ ಕಾಲ ಮಿತಿಯ ಯೋಗ ಶಿಬಿರಕ್ಕೆ ಸೋಮವಾರ ಇಲ್ಲಿನ ಸಂಸ್ಥೆಯ ಆವಾರದಲ್ಲಿ ಚಾಲನೆ ದೊರಕಿತು.   ಯೋಗ ಶಿಕ್ಷಕ ಸುಬ್ರಾಯ ಭಟ್ಟ ಹಾಗೂ ದಿವಾಕರ ಮರಾಠಿ ಯೋಗಾಭ್ಯಾಸದ ಮಹತ್ವದ ಕುರಿತು ಶಿಬಿರಾರ್ಥಿಗಳಿಗೆ ವಿವರಿಸಿದರು. ನಂತರ ಯೋಗ, ಪ್ರಾಣಾಯಾಮ ತರಬೇತಿ ನಡೆಸಿಕೊಟ್ಟರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಮುಖ್ಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ದೀಪ ಬೆಳಗಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಖೈರುನ್ ಶೇಖ್ ಸ್ವಾಗತಿಸಿದರು. ವಿಶ್ವದರ್ಶನ ಸೇವಾ ತಂಡದ ಎಂ.ಆರ್ ಭಟ್ಟ…

Read More

ಮಹಿಳೆಯರನ್ನು ಗೌರವಿಸುವ ಸಮಾಜ ನಿರ್ಮಾಣಕ್ಕೆ ಕರೆ

ಯಲ್ಲಾಪುರ: ಪುರುಷ ಹಾಗೂ ಮಹಿಳೆ ಎಂಬ ತಾರತಮ್ಯ ಮಾಡದೇ ಮಹಿಳೆಯರನ್ನು ಗೌರವಿಸುವ ಸಮಾಜ ಇನ್ನಷ್ಟು ಸದೃಢವಾಗಬೇಕಿದೆ ಎಂದು ಉಪನ್ಯಾಸಕಿ ಶ್ಯಾಮಲಾ ಕೆರೆಗದ್ದೆ ಹೇಳಿದರು.   ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ಮಹಿಳಾ ಸಮಾನತಾ ದಿನಾಚರಣೆಯಲ್ಲಿ ವಿಶೇಷ ಉಪನ್ಯಾಸ ನೀಡಿದರು. ಶಿಕ್ಷಣ, ಆರ್ಥಿಕತೆ ಸೇರಿದಂತೆ ಹಲವು ವಿಷಯಗಳಲ್ಲಿ ಮೊದಲು ಮಹಿಳೆಯರಿಗೆ ಅವಕಾಶ ಇರಲಿಲ್ಲ. ಬದಲಾದ ಕಾಲಘಟ್ಟದಲ್ಲಿ ಮಹಿಳೆಯರು ಸಹ ಪುರುಷರಿಗೆ ಸರಿ ಸಮಾನವಾಗಿ ದುಡಿಯುತ್ತಿದ್ದಾರೆ. ಪುರುಷ ಹಾಗೂ ಮಹಿಳೆ ಎಂಬ ತಾರತಮ್ಯ ಮರೆತು ಮಹಿಳೆಯರನ್ನು ಗೌರವಿಸುವ ಮನಸ್ಥಿತಿ ಇನ್ನಷ್ಟು…

Read More

ಸಹೋದರತ್ವ ಸಾರುವ ರಕ್ಷಾ ಬಂಧನ

ಯಲ್ಲಾಪುರ: ರಾಖಿಯೂ ಬಂಧುತ್ವ, ಸಹೋದರತೆ, ಏಕತೆ ಹಾಗೂ ಸ್ನೇಹದ ಸಂಕೇತವಾಗಿದೆ ಎಂದು ಉಪನ್ಯಾಸಕ ಡಾ. ಡಿ.ಕೆ ಗಾಂವ್ಕರ್ ಹೇಳಿದರು.   ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ನಡೆದ ರಕ್ಷಾ ಬಂಧನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಹೋದರತ್ವವನ್ನು ಸಾರುವ ರಾಖಿ ಪ್ರೀತಿಯ ಸಂಕೇತವಾಗಿದೆ. ತನ್ನನ್ನು ರಕ್ಷಿಸುವವರಿಗೆ ಯಾವ ವಿಘ್ನವೂ ಆಗದಿರಲಿ ಎಂಬ ಪ್ರಾರ್ಥನೆಯಿಂದ ರಕ್ಷೆಯನ್ನು ಕಟ್ಟಲಾಗುತ್ತದೆ. ರಾಖಿ ಹಬ್ಬವೂ ನಾವೇಲ್ಲರೂ ಒಂದೇ ಎಂಬ ಸಂದೇಶ ಸಾರುತ್ತದೆ. 1905ರಲ್ಲಿ ಹಿಂದು ಹಾಗೂ ಮುಸ್ಲಿಂ ಧರ್ಮಿಯರು ಪರಸ್ಪರ ರಾಖಿ ಕಟ್ಟಿಕೊಂಡು ಸಹೋದರತ್ವದ…

Read More

ಮಕ್ಕಳನ್ನು ಸ್ವಾಗತಿಸಿದ ಆಡಳಿತ ಮಂಡಳಿ

ಯಲ್ಲಾಪುರ: ತಾಲೂಕಿನ ವಿಶ್ವದರ್ಶನ ಶಿಕ್ಷಣ ಸಂಸ್ಥೆಗೆ ಪ್ರವೇಶ ಬಯಸಿ ಆಗಮಿಸಿದ ವಿದ್ಯಾರ್ಥಿಗಳನ್ನು ಸೋಮವಾರ ಆಡಳಿತ ಮಂಡಳಿ ಆತ್ಮೀಯವಾಗಿ ಬರ ಮಾಡಿಕೊಂಡಿದೆ.    ಪಟ್ಟಣದ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಸ್ವಾಗತಿಸಿ ಮಾತನಾಡಿದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕ ನರಸಿಂಹಮೂರ್ತಿ ಕೋಣೆಮನೆ, ಶಾಲಾ ಆವರಣದಲ್ಲಿ ಕೊರೊನಾ ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ವಿದ್ಯಾರ್ಥಿಗಳು ಸಹ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು ಎಂದು ಕರೆ ನೀಡಿದರು. ಭವ್ಯ ಭವಿಷ್ಯ ರೂಪಿಸಿಕೊಳ್ಳುವುದಕ್ಕಾಗಿ ವಿದ್ಯಾರ್ಥಿಗಳು ಮನೋಸ್ಥೈರ್ಯ ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು. ಹರಿಹರಪುರ ಪ್ರಭೋಧಿನಿ ಗುರುಕುಲದ…

Read More

ವಿಶ್ವದರ್ಶನದಲ್ಲಿ KSOU ಕಲಿಕಾ ಕೇಂದ್ರ ಪ್ರಾರಂಭ

ಯಲ್ಲಾಪುರ: ಪಟ್ಟಣದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಮಹಾ ವಿದ್ಯಾಲಯಕ್ಕೆ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾನಿಲಯದ “ಕಲಿಕಾರ್ಥಿ ಸಹಾಯ ಕೇಂದ್ರ” ಪ್ರಾರಂಭಿಸಲು ಅನುಮತಿ ದೊರೆತಿದೆ. ದೂರ ಶಿಕ್ಷಣ ವ್ಯವಸ್ಥೆ ಮೂಲಕ ಉನ್ನತ ಶಿಕ್ಷಣ ಪಡೆಯುವವರಿಗೆ ಈ ಕಲಿಕಾ ಕೇಂದ್ರ ನೆರವಾಗಲಿದೆ. ಪದವಿ, ಸ್ನಾತಕೋತರ ಪದವಿಗೆ ಸಂಬoಧಿಸಿ ಬಿ.ಎ, ಬಿ.ಕಾಂ, ಬಿ.ಲಿಬ್, ಬಿ.ಬಿ.ಎ ಹಾಗೂ ಬಿ.ಎಸ್ಸಿ ಪ್ರವೇಶ ಬಯಸುವ ಅಭ್ಯರ್ಥಿಗಳು ಇಲ್ಲಿ ದಾಖಲಾಗಬಹುದಾಗಿದೆ. ಸ್ನಾತಕೋತರ ಪದವಿಗೆ ಸಂಬoಧಿಸಿ ಎಂ.ಎ, ಎಂ.ಕಾo, ಎಂ.ಲಿಬ್ ಹಾಗೂ ಎಂ.ಎಸ್.ಇ ಕಲಿಕಾ ಕೇಂದ್ರವನ್ನು ತೆರೆಯಲಾಗಿದೆ….

Read More

ವಿಶ್ವದರ್ಶನ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡಿದ ಕಾಶಿನಾಥ ನಾಯ್ಕ

ಯಲ್ಲಾಪುರ: ಟೋಕಿಯೋ ಒಲೆಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದ ನಿರಜ್ ಚೋಪ್ರಾ ಅವರ ತರಬೇತುದಾರರಾದ ಕಾಶಿನಾಥ ನಾಯ್ಕ ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿ ನೀಡಿದರು. ಸಭಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಅವರು ನಂತರ ಮಕ್ಕಳನ್ನು ಮೈದಾನಕ್ಕೆ ಕರೆದೊಯ್ದು ಜಾವೆಲಿನ್ ಎಸೆತ ಮಾಡಿಸಿದರು. “ತನ್ನ ಕ್ರೀಡಾ ಸಾಧನೆಗೆ ಭಾರತೀಯ ಸೈನ್ಯವೇ ಪ್ರೇರಣೆಯಾಗಿದೆ ಎಂದು ಅವರು ಹೇಳಿದರು. ಕಾರ್ಗಿಲ್ ಯುದ್ದದ ಅಂತ್ಯದ ವೇಳೆ ನಾನು ಸೇನೆ ಸೇರಿದೆ. ಅಲ್ಲಿನ ಕ್ರೀಡಾ ವಿಭಾಗ ಗಮನ ಸೆಳೆಯಿತು. ಅಲ್ಲಿ…

Read More

ವಿಶ್ವದರ್ಶನ ಸ್ಕೂಲ್ ಆಫ್ ನಸಿಂಗ್ ನಲ್ಲಿ ವಿಶ್ವ ಆಹಾರ ದಿನಾಚರಣೆ

ಅಂಕೋಲಾ: ಇಲ್ಲಿನ ವಿಶ್ವದರ್ಶನ ಸ್ಕೂಲ್ ಆಫ್ ನರ್ಸಿಂಗ್ ನಲ್ಲಿ ವಿಶ್ವ ಆಹಾರ ದಿನಾಚರಣೆ ಅಂಗವಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮ ನಡೆಯಿತು.“ಆರೋಗ್ಯಕರ ನಾಳೆಗಾಗಿ ಇಂದು ಸುರಕ್ಷಿತ ಆಹಾರ” ಎಂಬ ವಿಷಯದ ಕುರಿತು ಸಂಸ್ಥೆಯ ಉಪ ಪ್ರಾಚಾರ್ಯರಾದ ದೀಪಾಲಿ ಕುರ್ಡೇಕರ್ ಅವರು ಉಪನ್ಯಾಸ ನೀಡಿದರು. ಸುರಕ್ಷಿತ ಆಹಾರ ಉತ್ಪಾದನೆ ಹಾಗೂ ನಿಯಮಿತ ಸೇವನೆಯ ಬಗ್ಗೆ ಅವರು ವಿವರಿಸಿದರು. ಉತ್ತಮ ಆಹಾರದಿಂದ ಉತ್ತಮ ಆರೋಗ್ಯ ದೊರೆಯುತ್ತದೆ ಎಂದು ಅವರು ತಿಳಿಸಿದರು. ಸಂಸ್ಥೆಯ ಶಾಖಾ ಕಾರ್ಯನಿರ್ವಾಹಕರಾದ ಗುರುದತ್ತ ನಾಯಕ ಕಾರ್ಯಕ್ರಮ ಉದ್ಘಾಟಿಸಿದರು. ಸಂಸ್ಥೆಯ…

Read More

100% SSLC results

SSLC Examination Vidyadarshana Educational Institute Recording 100% result for the past six years. This year too, the students of Vidyadarshana Educational Institute have achieved the highest level. Congratulations to them.

Read More